‘ಚೀಟಿ ಹೆಸರಿನಲ್ಲಿ ಜನರಿಂದ ₹ 2.91 ಕೋಟಿ ಸಂಗ್ರಹಿಸಿದ್ದ ಆರ್. ಶ್ರೀಧರ್, ಹಣ ವಾಪಸು ನೀಡದೇ ವಂಚಿಸಿದ್ದರು. ಈ ಸಂಬಂಧ ದಾಖಲಾದ ಪ್ರಕರಣದ ವಿಚಾರಣೆಗಾಗಿ ಶ್ರೀಧರ್ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಇದನ್ನೇ ಅಕ್ರಮ ಬಂಧನವೆಂದು ಆಯೋಗಕ್ಕೆ ಮಗ ಸುಳ್ಳು ದೂರು ನೀಡಿದ್ದರು. ಪೊಲೀಸರು ಹಣ ಕೇಳಿದ್ದಾರೆಂದು ಸುಖಾಸುಮ್ಮನೇ ಆರೋಪಿಸಿದ್ದರು. ಬಂಧನ ತಪ್ಪಿಸುವ ಉದ್ದೇಶ ಇದರ ಹಿಂದಿತ್ತು’ ಎಂದು ಪೊಲೀಸ್ ಮೂಲಗಳು ಹೇಳಿವೆ.