ಜಿ.ಎಸ್.ಲೋಖಂಡೆ ಬರೆದಿದ್ದ ‘ಭೀಮರಾವ್ ರಾಮ್ ಜಿ ಅಂಬೇಡ್ಕರ್– ಸಾಮಾಜಿಕ ಪ್ರಜಾಪ್ರಭುತ್ವದ ಒಂದು ಅಧ್ಯಯನ’ ಪುಸ್ತಕವನ್ನು ಜಾಕೋಬ್ ಅವರು ಕನ್ನಡಕ್ಕೆ ಅನುವಾದಿಸಿದ್ದರು. ಕನ್ನಡ ಕ್ರೈಸ್ತ ಚಳವಳಿಗೆ ಬೆಂಬಲಿಗರಾಗಿದ್ದ ಜಾಕೋಬ್ ಎಂ.ಆರ್. ಅಂತೋಣಿಸ್ವಾಮಿ, ಮಂಡಿ ಇನ್ನಾಸಪ್ಪ ಹಾಗೂ ಸಿ. ಮರಿ ಜೋಸೆಫ್ ಅವರ ಆಪ್ತ ಒಡನಾಟದಲ್ಲಿ ಹಲವು ಕಾರ್ಯಕ್ರಮ ರೂಪಿಸಿದ್ದರು. ಹೊಸೂರು ರಸ್ತೆಯ ಸಂತ ಪ್ಯಾಟ್ರಿಕ್ಕರ್ ಸಮಾಧಿ ಭೂಮಿಯಲ್ಲಿ ಮಂಗಳವಾರ ಅಂತ್ಯಕ್ರಿಯೆ ನಡೆಯಲಿದೆ.