’21 ವರ್ಷದ ಯುವತಿ ದೂರು ನೀಡಿದ್ದಾರೆ. ಅದರನ್ವಯ ಆರೋಪಿ ಎನ್ನಲಾದ ಉದಯ್ ಕಿರಣ್ ಎಂಬುವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆತನ ವಿಚಾರಣೆ ನಡೆಸಬೇಕಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ನಗರದ ಕಾಲೇಜೊಂದರಲ್ಲಿ ಯುವತಿ ವ್ಯಾಸಂಗ ಮಾಡುತ್ತಿದ್ದಾರೆ. ಅವರ ಪಿಯುಸಿ ಸ್ನೇಹಿತನಾದ ಆರೋಪಿ, ಆಗಾಗ ಯುವತಿ ಜೊತೆ ಮಾತನಾಡುತ್ತಿದ್ದ. ನಂತರ, ಇಬ್ಬರ ನಡುವೆ ಸಲುಗೆ ಬೆಳೆದಿತ್ತು. ರಾಯಚೂರಿನ ಆರೋಪಿ, ಯುವತಿಯನ್ನು ಭೇಟಿಯಾಗಲೆಂದು ಇತ್ತೀಚೆಗೆ ನಗರಕ್ಕೆ ಬಂದಿದ್ದ.