‘ದೇಶದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಜನರನ್ನು ಸರ್ಕಾರದ ವಿರುದ್ಧ ಎತ್ತಿ ಕಟ್ಟಿದ್ದಕ್ಕೆ, ಕಾನೂನು ಉಲ್ಲಂಘನೆ ಎಂಬ ಹಲವು ಪ್ರಕರಣಗಳಲ್ಲಿ ಗಾಂಧೀಜಿ ಅವರನ್ನು ಬಂಧಿಸಲಾಗಿತ್ತು. ಆದರೆ, ಅವರು ಕೋರ್ಟ್ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿಗಳ ಮುಂದೆ ಆ ಎಲ್ಲಾ ತಪ್ಪುಗಳನ್ನು ತಾವೇ ಮಾಡಿರುವುದಾಗಿ ಒಪ್ಪಿಕೊಂಡರು. ಹೀಗಾಗಿ 2,332 ದಿನಗಳ ಜೈಲು ಶಿಕ್ಷೆ ಅನುಭವಿಸಿದರು. ಆದರೆ ಇವತ್ತು ಕೋರ್ಟ್ನ ಹೊರಗಡೆ ಬಾಬರಿ ಮಸೀದಿಯ ಧ್ವಂಸ, ಗೋದ್ರಾ ಹತ್ಯಾಕಾಂಡವನ್ನು ತಾನೇ ಮಾಡಿದ್ದು ಎಂದು ಮೀಸೆ ತಿರುಗಿಸಿ ಹೇಳುತ್ತಾರೆ’ ಎಂದು ವಿಷಾದ ವ್ಯಕ್ತಪಡಿಸಿದರು.