ಇಡೀ ಉಪನ್ಯಾಸದಲ್ಲಿ ಗಾಂಧೀಜಿ ಅವರ ಅಧ್ಯಾತ್ಮಿಕ, ಧಾರ್ಮಿಕ ನಿಲುವುಗಳು, ಹಿಂದೂ ತತ್ವಗಳ ಜತೆ ಗಾಂಧೀಜಿ ಬದುಕಿನ ಸಾಮ್ಯತೆಯ ಚರ್ಚೆ ನಡೆಯಿತು. ಸೀಮಿತ ಪ್ರಮಾಣದ ಶ್ರೋತೃ ಸಮೂಹ ಗಾಂಧೀಜಿ ಚಿಂತನೆಗಳನ್ನು ಗಂಭೀರವಾಗಿ ಆಲಿಸಿದರು. ಕಾರ್ಯಕ್ರಮಕ್ಕೂ ಮುನ್ನ ವೈಷ್ಣವ ಜನತೋ ಹಾಡಿನ ಗಾಯನ ನಡೆಯಿತು. ಡಾಲಿ ಹಾಲ್ಗೆ ಗಾಂಧೀಜಿ ಅವರು ಬಂದಿದ್ದ ದಿನಗಳನ್ನು ಮೆಲುಕು ಹಾಕಲಾಯಿತು.