ಮಣ್ಣಿನ ಗಣೇಶ: ಜಾಗೃತಿ ಜಾಥಾ

ಬೆಂಗಳೂರು: ‘ಪಿಒಪಿ ಗಣೇಶ ಬೇಡವೇ ಬೇಡ, ಮಣ್ಣಿನ ಗಣೇಶನಿಗೆ ಜೈ ಎನ್ನಿ’ ಎಂದು ಘೋಷಣೆ ಕೂಗುತ್ತಾ, ಮಣ್ಣಿನ ಮೂರ್ತಿಗಳನ್ನು ಕೈಯಲ್ಲಿ ಹಿಡಿದಿದ್ದ ನೂರಾರು ವಿದ್ಯಾರ್ಥಿಗಳು ಜಯನಗರದಲ್ಲಿ ಸೋಮವಾರ ಜಾಗೃತಿ ಜಾಥಾ ನಡೆಸಿದರು.
ಬಾಂಧವ ಸಂಸ್ಥೆ ಆಯೋಜಿಸಿದ್ದ ಜಾಥಾದಲ್ಲಿ ಮೂರು ಸಾವಿರ ಮಣ್ಣಿನ ಗಣೇಶ ಮೂರ್ತಿಗಳನ್ನು ಉಚಿತವಾಗಿ ಹಂaಚಲಾಯಿತು. ಪಿಒಪಿ ಗಣೇಶ ಮೂರ್ತಿಗಳನ್ನು ಬಳಸಿದರೆ ಪರಿಸರಕ್ಕೆ ಆಗುವ ಹಾನಿಯನ್ನು ಜನರಿಗೆ ತಿಳಿಸಲಾಯಿತು.
ಶಾಸಕಿ ಸೌಮ್ಯಾ ರೆಡ್ಡಿ ಮಾತನಾಡಿ, ‘ನೀರಿನಲ್ಲಿ ಕರಗುವಂತಹ ಮಣ್ಣಿನ ಮೂರ್ತಿಯಿಂದ ಯಾವುದೇ ಹಾನಿ ಇಲ್ಲ. ಆದರೆ ಪಿಒಪಿ ಮೂರ್ತಿಗಳನ್ನು ಬಳಸಿದರೆ ನೀರು ಕಲುಷಿತಗೊಂಡು ಜಲಚರಗಳು ಸಾಯುತ್ತವೆ. ರಾಸಾಯನಿಕ ನೀರನ್ನು ಸೇರುತ್ತದೆ. ಪರಿಸರ ಉಳಿಸಲು ಎಲ್ಲರೂ ಕೈ ಜೋಡಿಸಿ’ ಎಂದು ಮನವಿ ಮಾಡಿದರು.
ಸೆಪ್ಟೆಂಬರ್ 10 ಮತ್ತು 11ರಂದು ಜೆ.ಪಿ ನಗರ ಹಾಗೂ ಬಿಟಿಎಂ ಬಡಾವಣೆಗಳಲ್ಲೂ ಸಾರ್ವಜನಿಕರಿಗೆ ಉಚಿತವಾಗಿ ಮಣ್ಣಿನ ಗಣೇಶ ಮೂರ್ತಿಗಳನ್ನು ವಿತರಿಸಲಾಗುತ್ತದೆ. ಹೆಸರು ನೋಂದಾಯಿಸಲು 9341389999 ಮೊಬೈಲ್ ಸಂಖ್ಯೆಗೆ ಸಂಪರ್ಕಿಸಬಹುದು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.