‘ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6ಗಂಟೆವರೆಗೆ ಧ್ವನಿವರ್ಧಕ ಬಳಸದಂತೆ ಜನರಿಗೆ ಜಾಗೃತಿ ಮೂಡಿಸಲು ನಿರ್ಧರಿಸಲಾಗಿದೆ. ಗುರುತಿಸಲ್ಪಟ್ಟ ಕಲ್ಯಾಣಿ ಹಾಗೂ ತಾತ್ಕಾಲಿಕ ಕೊಳಗಳಲ್ಲಿ ಮಾತ್ರ ಗಣೇಶ ವಿಗ್ರಹ ವಿಸರ್ಜನೆ ಮಾಡಬೇಕು’ ಎಂದು ತಿಳಿಸಿದರು.ಯಡಿಯೂರು,ಕೈಕೊಂಡ್ರಹಳ್ಳಿ, ದೊಡ್ಡನೆಕ್ಕುಂದಿ, ಕಸವನಹಳ್ಳಿ,ಮುನ್ನೇಕೊಳಾಲ್,ದೊರೆಕೆರೆ,ಸಿಂಗಸಂದ್ರ,ಹೇರೋಹಳ್ಳಿ, ಮಲ್ಲತ್ತಹಳ್ಳಿ,ಉಲ್ಲಾಳ, ದಾಸರಹಳ್ಳಿ,ಸ್ಯಾಂಕಿ,ಹಲಸೂರು, ಕೋಗಿಲು, ಜಕ್ಕೂರು, ರಾಚೇನಹಳ್ಳಿ, ಅಟ್ಟೂರು, ಅಲ್ಲಾಳಸಂದ್ರ ಹಾಗೂ ದೊಡ್ಡಬೊಮ್ಮಸಂದ್ರ ಕೆರೆಯಲ್ಲಿ ಗಣೇಶ ವಿಗ್ರಹದ ವಿಸರ್ಜನೆಗೆ ಅವಕಾಶ ನೀಡಲಾಗುತ್ತಿದೆ.