<p><strong>ಪೀಣ್ಯ ದಾಸರಹಳ್ಳಿ:</strong> ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸುಮಾರು ₹11 ಕೋಟಿ ವೆಚ್ಚದಲ್ಲಿ ಚಿಕ್ಕಬಾಣಾವರ ಬಳಿಯ ಗಾಣಿಗರಹಳ್ಳಿ ಕೆರೆಯನ್ನು ಅಭಿವೃದ್ಧಿಪಡಿಸಲಿದೆ ಎಂದು ಶಾಸಕ ಎಸ್. ಮುನಿರಾಜು ಹೇಳಿದರು.</p>.<p>ಗಾಣಿಗರಹಳ್ಳಿ ಕೆರೆ ಪುನರುಜ್ಜೀವನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಲುಷಿತಗೊಂಡಿದ್ದ ಈ ಕೆರೆಯನ್ನು ಡಾ. ಶಿವರಾಮ ಕಾರಂತ ಬಡಾವಣೆ ಅಭಿವೃದ್ಧಿಯ ಜೊತೆಗೆ ಪುನರುಜ್ಜೀವನಗೊಳಿಸಲಿದೆ ಎಂದರು.</p>.<p>ಸುತ್ತಮುತ್ತಲ ಜಾಗವನ್ನು ಬಿಡಿಎ ಅಭಿವೃದ್ಧಿ ಮಾಡುತ್ತಿರುವುದರಿಂದ ಅದರ ಜೊತೆಗೆ ಕಲುಷಿತಗೊಂಡಿದ್ದ ಕೆರೆಯನ್ನು ಸ್ವಚ್ಛ ಸುಂದರ ವನ್ನಾಗಿ ಅಭಿವೃದ್ಧಿ ಮಾಡಲಾಗುತ್ತಿದೆ. ಇದು ಸುಮಾರು ವರ್ಷಗಳ ಜನರ ಜೀವನ ನಾಡಿಯಂತಿತ್ತು ಎಂದರು.</p>.<p>ಪುನರುಜ್ಜೀವನದ ಭಾಗವಾಗಿ ಕೆರೆಯಲ್ಲಿ ಬೆಳೆದಿದ್ದ ಗಿಡಮರಗಳ ತೆರವು, ಕೆರೆಯ ಹೂಳು ತೆಗೆಯುವಿಕೆ, ಕೆರೆಯ ಉದ್ದಕ್ಕೂ ಮಣ್ಣಿನ ಏರಿ ಮತ್ತು ನಡಿಗೆ ಪಥ, ಏರಿಯ ಒಳಭಾಗದಲ್ಲಿ ಕಲ್ಲಿನ ಜೋಡಣೆ, ಕೆರೆಯ ಸುತ್ತಲೂ ತಂತಿ ಬೇಲಿ ಅಳವಡಿಕೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.</p>.<p>ಕೆರೆಯ ವಿಸ್ತೀರ್ಣ ಸುಮಾರು 54 ಎಕರೆ ಇದ್ದು, ಇದರಲ್ಲಿ ಸ್ವಲ್ಪ ಜಾಗ ಓತ್ತುವರಿಯಾಗಿದೆ. ಅದನ್ನು ಸರ್ವೇ ಮಾಡಿಸಲಾಗುವುದು. ಕೆರೆಗೆ ಕಲುಷಿತ ನೀರು ಬರದಂತೆ ತಡೆಯಲಾಗುವುದು ಎಂದರು.</p>.<p>ಚಿಕ್ಕಬಾಣಾವರ ಪುರಸಭೆ ಮುಖ್ಯ ಅಧಿಕಾರಿ ಮಂಜುನಾಥ್, ಬಿಡಿಎ ಎಂಜಿನಿಯರ್ ಅವಲಪ್ಪ, ಬಿಜೆಪಿ ಮುಖಂಡರಾದ ಶ್ರೀನಿವಾಸಮೂರ್ತಿ, ಭಾಗ್ಯಮ್ಮ ಕೃಷ್ಣಯ್ಯ, ಗಿರೀಶ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪೀಣ್ಯ ದಾಸರಹಳ್ಳಿ:</strong> ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸುಮಾರು ₹11 ಕೋಟಿ ವೆಚ್ಚದಲ್ಲಿ ಚಿಕ್ಕಬಾಣಾವರ ಬಳಿಯ ಗಾಣಿಗರಹಳ್ಳಿ ಕೆರೆಯನ್ನು ಅಭಿವೃದ್ಧಿಪಡಿಸಲಿದೆ ಎಂದು ಶಾಸಕ ಎಸ್. ಮುನಿರಾಜು ಹೇಳಿದರು.</p>.<p>ಗಾಣಿಗರಹಳ್ಳಿ ಕೆರೆ ಪುನರುಜ್ಜೀವನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಲುಷಿತಗೊಂಡಿದ್ದ ಈ ಕೆರೆಯನ್ನು ಡಾ. ಶಿವರಾಮ ಕಾರಂತ ಬಡಾವಣೆ ಅಭಿವೃದ್ಧಿಯ ಜೊತೆಗೆ ಪುನರುಜ್ಜೀವನಗೊಳಿಸಲಿದೆ ಎಂದರು.</p>.<p>ಸುತ್ತಮುತ್ತಲ ಜಾಗವನ್ನು ಬಿಡಿಎ ಅಭಿವೃದ್ಧಿ ಮಾಡುತ್ತಿರುವುದರಿಂದ ಅದರ ಜೊತೆಗೆ ಕಲುಷಿತಗೊಂಡಿದ್ದ ಕೆರೆಯನ್ನು ಸ್ವಚ್ಛ ಸುಂದರ ವನ್ನಾಗಿ ಅಭಿವೃದ್ಧಿ ಮಾಡಲಾಗುತ್ತಿದೆ. ಇದು ಸುಮಾರು ವರ್ಷಗಳ ಜನರ ಜೀವನ ನಾಡಿಯಂತಿತ್ತು ಎಂದರು.</p>.<p>ಪುನರುಜ್ಜೀವನದ ಭಾಗವಾಗಿ ಕೆರೆಯಲ್ಲಿ ಬೆಳೆದಿದ್ದ ಗಿಡಮರಗಳ ತೆರವು, ಕೆರೆಯ ಹೂಳು ತೆಗೆಯುವಿಕೆ, ಕೆರೆಯ ಉದ್ದಕ್ಕೂ ಮಣ್ಣಿನ ಏರಿ ಮತ್ತು ನಡಿಗೆ ಪಥ, ಏರಿಯ ಒಳಭಾಗದಲ್ಲಿ ಕಲ್ಲಿನ ಜೋಡಣೆ, ಕೆರೆಯ ಸುತ್ತಲೂ ತಂತಿ ಬೇಲಿ ಅಳವಡಿಕೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.</p>.<p>ಕೆರೆಯ ವಿಸ್ತೀರ್ಣ ಸುಮಾರು 54 ಎಕರೆ ಇದ್ದು, ಇದರಲ್ಲಿ ಸ್ವಲ್ಪ ಜಾಗ ಓತ್ತುವರಿಯಾಗಿದೆ. ಅದನ್ನು ಸರ್ವೇ ಮಾಡಿಸಲಾಗುವುದು. ಕೆರೆಗೆ ಕಲುಷಿತ ನೀರು ಬರದಂತೆ ತಡೆಯಲಾಗುವುದು ಎಂದರು.</p>.<p>ಚಿಕ್ಕಬಾಣಾವರ ಪುರಸಭೆ ಮುಖ್ಯ ಅಧಿಕಾರಿ ಮಂಜುನಾಥ್, ಬಿಡಿಎ ಎಂಜಿನಿಯರ್ ಅವಲಪ್ಪ, ಬಿಜೆಪಿ ಮುಖಂಡರಾದ ಶ್ರೀನಿವಾಸಮೂರ್ತಿ, ಭಾಗ್ಯಮ್ಮ ಕೃಷ್ಣಯ್ಯ, ಗಿರೀಶ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>