‘ಮಹಿಳೆಯ ಮನೆಗೆ ಶನಿವಾರ ರಾತ್ರಿ ಬಂದಿದ್ದ ಭಾಸ್ಕರ್, ‘ನಿನಗೆ ಹಾಗೂ ನಿನ್ನ ಮಕ್ಕಳಿಗೆ ಹೊಸ ಮನೆ ಮಾಡಿಕೊಡುತ್ತೇನೆ. ನನ್ನ ಜೊತೆ ಬಾ’ ಎಂದಿದ್ದರು. ಅದಕ್ಕೆ ಒಪ್ಪಿದ್ದ ಮಹಿಳೆ, ಭಾಸ್ಕರ್ ಜೊತೆ ಆಟೊದಲ್ಲಿ ಹೊರಟಿದ್ದರು. ವಿರೋಧ ವ್ಯಕ್ತಪಡಿಸಿದ್ದ ಮಹಿಳೆಯ ಹಿರಿಯ ಮಗ, ಆಟೊದಿಂದ ಇಳಿದು ಓಡಿಹೋಗಿದ್ದ. ಆರೋಪಿ ಮುನಿರಾಜುವಿಗೆ ವಿಷಯ ತಿಳಿಸಿದ್ದ’ ಎಂದೂ ಅಧಿಕಾರಿ ತಿಳಿಸಿದರು.