ಪ್ರಶಾಂತ ನಗರದ ನಿವಾಸಿ, ಕಾಲೇಜು ಉಪನ್ಯಾಸಕ ರಾಮಾಂಜಿನಪ್ಪ ಹಾಗೂ ರೂಪಶ್ರೀ ದಂಪತಿ ಇತ್ತೀಚೆಗೆ ನಡೆದ ತಮ್ಮ ಹೊಸ ಮನೆಯ ಗೃಹಪ್ರವೇಶದಲ್ಲಿ ಆಪ್ತೇಷ್ಟರಿಂದ ಬಂದ ₹38 ಸಾವಿರ ಉಡುಗೊರೆ ಮೊತ್ತದೊಂದಿಗೆ ಸ್ವಂತದ ₹2 ಸಾವಿರ ಸೇರಿಸಿ ಒಟ್ಟು ₹40 ಸಾವಿರ ಹಣದ ಡಿಡಿ ಮಾಡಿಸಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.