ಸೋಮವಾರ ಇಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಪರಿಷತ್ತಿನ ಪ್ರದಾನ ಕಾರ್ಯದರ್ಶಿ ಎಸ್.ಬಿ. ಅಂಗಡಿ,‘2021ನೇ ಸಾಲಿನ ಪ್ರಶಸ್ತಿಗಳಿಗೆ ನಿವೃತ್ತ ಅಧ್ಯಾಪಕ ಜಿ.ಎ.ಶಿವಲಿಂಗಯ್ಯ
(ಗೊರುಚ ಶರಣ ಪ್ರಶಸ್ತಿ), ಪತ್ರಾಂಕಿತ ನಿವೃತ್ತ ವ್ಯವಸ್ಥಾಪಕ ಜೀನಹಳ್ಳಿ ಸಿದ್ಧಲಿಂಗಪ್ಪ (ಗೊರುಚ ಜಾನಪದ ಪ್ರಶಸ್ತಿ), ನಿವೃತ್ತ ಅಧ್ಯಾಪಕಿ ವಿಜಯಾದೇವಿ (ಗೊರುಚ ಶರಣ ಸಾಹಿತ್ಯ ಗ್ರಂಥ ಪ್ರಶಸ್ತಿ) ಹಾಗೂ ಉಪನ್ಯಾಸಕ ಎನ್.ಎನ್.ಚಿಕ್ಕಮಾದು (ಜನಪದ ಸಾಹಿತ್ಯ ಗ್ರಂಥ ಪ್ರಶಸ್ತಿ) ಅವರನ್ನು ಆಯ್ಕೆ ಮಾಡಲಾಗಿದೆ’ ಎಂದು ಅವರು ತಿಳಿಸಿದರು.