‘2008ರಲ್ಲಿ ಕಳವು ಮಾಡುವುದನ್ನು ಆರಂಭಿಸಿದ್ದ ಆರೋಪಿ ಇಲ್ಯಾಸ್, ಆಂಧ್ರಪ್ರದೇಶದ ಅನಂತಪುರ, ಹಿಂದೂಪುರ, ಕರ್ನಾಟಕದ ಗೌರಿಬಿದನೂರು, ಬೆಂಗಳೂರಿನ ತಾವರೆಕೆರೆ ಹಾಗೂ ಇತರೆಡೆ ತನ್ನ ಸಹಚರರ ಜೊತೆ ಸೇರಿ ಮನೆಗಳಿಗೆ ನುಗ್ಗಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ಹಲವು ಬಾರಿ ಜೈಲಿಗೆ ಹೋಗಿ ಬಂದರೂ ಕಳ್ಳತನ ನಿಲ್ಲಿಸಿರಲಿಲ್ಲ. ನಾಗೇಂದ್ರ ಕೂಡ ಅನಂತಪುರ, ಹಿಂದೂಪುರ, ಗೌರಿಬಿದನೂರು, ತುಮಕೂರಿನ ಮಧುಗಿರಿ, ಕೊರಟಗೆರೆ ಹಾಗೂ ಬೆಂಗಳೂರಿನ ವಿವಿಧೆಡೆ ನಡೆದಿದ್ದ ಕಳವು ಪ್ರಕರಣಗಳಲ್ಲಿ ಭಾಗಿಯಾಗಿ ಜೈಲುವಾಸ ಅನುಭವಿಸಿದ್ದ’ ಎಂದು ಮಾಹಿತಿ ನೀಡಿದ್ದಾರೆ.