‘ಎಂಪಿಸಿಗಳ ನಿಷ್ಕ್ರಿಯತೆ ನಮ್ಮ ರಾಜ್ಯಕ್ಕೆ ಸೀಮಿತವಲ್ಲ. ಪಶ್ಚಿಮ ಬಂಗಾಳ ಹೊರತುಪಡಿಸಿದರೆ ಉಳಿದ ಯಾವ ರಾಜ್ಯಗಳಲ್ಲೂ ಅವು ಸಕ್ರಿಯವಾಗಿಲ್ಲ. ಸಂವಿಧಾನದ 74ನೇ ತಿದ್ದುಪಡಿಗಳ ಪ್ರಕಾರ ನಗರದ ಅಭಿವೃದ್ಧಿ ಮುನ್ನೋಟಗಳಿಗೆ ಸಂಬಂಧಿಸಿದ ನೀತಿಯನ್ನು ರೂಪಿಸುವ ಅಧಿಕಾರ ಇರುವುದು ಬಿಎಂಪಿಸಿಗೆ. ಆದರೆ, ಅದರ ಮಹತ್ವವನ್ನು ಯಾವ ಸರ್ಕಾರವೂ ಅರಿತುಕೊಂಡಿಲ್ಲ’ ಎನ್ನುತ್ತಾರೆ ನಗರ ಯೋಜನಾ ತಜ್ಞ ವಿ.ರವಿಚಂದರ್.