‘ಈ ಜಮೀನು ಒತ್ತುವರಿಯಾಗಿರುವ ಕುರಿತು 2001ರಲ್ಲೇ ಅಂದಿನ ವಿಶೇಷ ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದಿತ್ತು. ಸ್ಥಳ ಪರಿಶೀಲಿಸಿದ್ದ ಅಧಿಕಾರಿಗಳು, ಬೋಗಸ್ ದಾಖಲೆ ರದ್ದುಗೊಳಿಸಿ, ಇದು ಸರ್ಕಾರದ ಸ್ವತ್ತು ಎಂದು ಆದೇಶಿಸಿದ್ದರು. ಅದಾದ ಬಳಿಕ ಯಾರೂ ಈ ಜಾಗದ ಕಡೆಗೆ ಬಂದಿರಲಿಲ್ಲ. ಹಾಗಾಗಿ, ಇಲ್ಲಿ ರಾಜಾರೋಷವಾಗಿ ಒತ್ತುವರಿ ನಡೆದಿದೆ. ಒತ್ತುವರಿದಾರರು ಜನರ ಬಾಯಿ ಮುಚ್ಚಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಆದರೆ, ಮೂಲ ದಾಖಲೆಗಳಲ್ಲಿ ಇದು ಸರ್ಕಾರದ ಜಮೀನು ಎಂದೇ ಇದೆ’ ಎಂದು ಗ್ರಾಮಸ್ಥ ಲಕ್ಷ್ಮಣ್ ವಿವರಿಸಿದರು.