‘ಅತಿಥಿ ಉಪನ್ಯಾಸಕರಿಗೆ ಜೀವನ ಭದ್ರತೆಯೇ ಇಲ್ಲ. ಕುಟುಂಬಕ್ಕೆ ನೆರವಾಗುವ ಪ್ರಶ್ನೆಯೂ ಇಲ್ಲ. 10 ತಿಂಗಳು ಪಾಠ ಮಾಡಿ ದರೆ, ಉಳಿದ ಎರಡು ತಿಂಗಳು ಹೊಟ್ಟೆ ಹೊರೆಯಲು ಕೂಲಿ, ಗಾರೆ ಕೆಲಸ, ಬಾರ್ಗಳಲ್ಲಿ ಸಪ್ಲೈ ಕೆಲಸ ಅನಿವಾರ್ಯ ವಾಗಿದೆ, ಇಷ್ಟಾಗಿಯೂ ಅವರಿಗೆ ಮುಂದಿನ ವರ್ಷ ಅದೇ ಕಾಲೇಜಿನಲ್ಲಿ ಕೆಲಸ ಸಿಗುವ ಖಾತರಿ ಇಲ್ಲ, ಅವರೇ ಕಲಿಸಿದ ವಿದ್ಯಾರ್ಥಿಗಳ ಜತೆಗೇ ಮತ್ತೆ ಸಂದರ್ಶನ ಎದುರಿಸಬೇಕು’ ಎಂದು ರಾಜ್ಯ ಶೈಕ್ಷಣಿಕ ದಿಕ್ಸೂಚಿ ಮತ್ತು ಸುಧಾರಣಾ ಸಮಿತಿಯ ಅಧ್ಯಕ್ಷ ಡಾ.ಸುಧಾಕರ ಹೊಸಳ್ಳಿ ತಿಳಿಸಿದರು.