ಸಮಿತಿಯ ಸದಸ್ಯ ಹಾಗೂ ಶಿಕ್ಷಕ ಆರ್.ಕೆ. ವೀರಭದ್ರಪ್ಪ, ‘ಅತಿಥಿ ಶಿಕ್ಷಕರಿಗೆ 6 ತಿಂಗಳುಗಳಿಂದ ಸಂಬಳ ನೀಡಿಲ್ಲ. ಸರ್ಕಾರದ ಯಾವುದೇ ಸಹಾಯವಿಲ್ಲದೆ ಇರುವುದರಿಂದ ಬದುಕು ನಡೆಸುವುದೇ ಕಷ್ಟವಾಗಿದೆ. ಸೇವೆಯನ್ನು ಕಾಯಂಗೊಳಿಸುವುದರಿಂದ ಸರ್ಕಾರಕ್ಕೆ ತಗುಲುವ ಖರ್ಚಿನಿಂದ ತಪ್ಪಿಸಿಕೊಳ್ಳಲು ನಮ್ಮನ್ನು ಅರೆಕಾಲಿಕ ಅಥವಾ ಅತಿಥಿ ಶಿಕ್ಷಕರು ಎಂದು ಕರೆಯಲಾಗುತ್ತಿದೆ. ಸಂಬಳದ ಬದಲು ಗೌರವ ಧನ ನೀಡಲಾಗುತ್ತದೆ. ಇದು, ಸಮಾನ ಕೆಲಸಕ್ಕೆ ಸಮಾನ ವೇತನ ಪಡೆಯುವ ಸಂವಿಧಾನ ಹಕ್ಕಿನ ಹರಣ’ ಎಂದರು.