‘ಜಮೀನು ವ್ಯಾಜ್ಯವೊಂದರಲ್ಲಿ ಆರೋಪಿಗಳು, ಜೈಲಿಗೂ ಹೋಗಿ ಬಂದಿದ್ದರು. ಇ–ಕಾಮರ್ಸ್ ಜಾಲತಾಣವೊಂದರಲ್ಲಿ ನಕಲಿ ಗನ್ ಖರೀದಿಸಿದ್ದ ಆರೋಪಿಗಳು, ಅದನ್ನು ಬಳಸಿಕೊಂಡು ಮಲ್ಲಿಕಾರ್ಜುನ್ ಅವರನ್ನು ಬೆದರಿಸಿದ್ದರು. ಇದೇ ಆರೋಪಿಗಳು ಮತ್ತಷ್ಟು ಮಂದಿಯನ್ನೂ ಬೆದರಿಸಿ ಹಣ ಸುಲಿಗೆ ಮಾಡಿರುವ ಮಾಹಿತಿ ಇದೆ. ಆ ಬಗ್ಗೆ ತನಿಖೆ ಮುಂದುವರಿದಿದೆ’ ಎಂದೂ ಮಾಹಿತಿ ನೀಡಿದರು.