‘ಕೊಲೆ ಯತ್ನ, ಸುಲಿಗೆ, ಅಪಹರಣ, ಹಲ್ಲೆ, ಜೀವ ಬೆದರಿಕೆ ಪ್ರಕರಣಗಳ ಆರೋಪಿಗಳಾದ ಸಹೋದರರ ಬಗ್ಗೆ ಕಡತ ಸಿದ್ಧಪಡಿಸಿ, ಗೂಂಡಾ ಕಾಯ್ದೆಯಡಿ ಬಂಧಿಸಲು ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಅವರಿಗೆ ಪ್ರಸ್ತಾವ ಸಲ್ಲಿಸಲಾಗಿತ್ತು. ಅದನ್ನು ಪರಿಶೀಲಿಸಿದ್ದ ಕಮಿಷನರ್, ಇಬ್ಬರನ್ನೂ ಬಂಧಿಸಲು ಅನುಮತಿ ನೀಡಿ ಸೆ. 23ರಂದು ಆದೇಶ ಹೊರಡಿಸಿದ್ದರು. ಅಂದೇ ಇಬ್ಬರನ್ನೂ ಬಂಧಿಸಿ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿತ್ತು.’