ಮೂಡಿಗೆರೆಯಲೋಕವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಬಿ.ಆರ್. ನವೀನ್ ಮಾತನಾಡಿ, ‘ಪ್ರಾಥಮಿಕ ಶಿಕ್ಷಣ ಪ್ರತಿಯೊಬ್ಬ ವ್ಯಕ್ತಿಗೂ ಭದ್ರ ಬುನಾದಿ. ಶಾಲೆಯಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ಅಕ್ಕಪಕ್ಕದ ಹಳ್ಳಿಗಳಿಗೆ ತೆರಳಿ, ಪಾಲಕರಿಗೆ ಶಿಕ್ಷಣದ ಮಹತ್ವದ ಬಗ್ಗೆ ಮನವರಿಕೆ ಮಾಡಿಸುತ್ತಿದ್ದೇನೆ. ‘ವಿದ್ಯಾಗಮ’ ಯೋಜನೆಯಡಿ ಮಕ್ಕಳ ಮನೆಗಳಿಗೆ ತೆರಳಿ, ಶಿಕ್ಷಣ ನೀಡುತ್ತಿದ್ದೇನೆ. ಮೊಬೈಲ್ ಇರುವವರು ಹಾಗೂ ಇಲ್ಲದವರನ್ನು ವಿಂಗಡಿಸಿ, ಪ್ರತ್ಯೇಕವಾಗಿ ಶಿಕ್ಷಣ ಒದಗಿಸಲಾಗುತ್ತಿದೆ’ ಎಂದರು.