ಬಿಜೆಪಿ ಅಧಿಕಾರಕ್ಕೆ ಬಂದ ಹೊಸತರಲ್ಲೇ ಟಿಪ್ಪು ಜಯಂತಿ ರದ್ದು ಮಾಡಿತ್ತು. ಟಿಪ್ಪು ವಿಷಯದಲ್ಲಿ ಬಿಜೆಪಿಯ ಕೆಲವು ನಾಯಕರು ಕೆಂಡ ಕಾರುತ್ತಿರುವ ಬೆನ್ನಲ್ಲೇ, ವಿಶ್ವನಾಥ್ ಅವರು ಟಿಪ್ಪುವಿನ ಕುರಿತು ಪ್ರಶಂಸೆ ಮಾಡಿದರುವುದು, ಬಿಜೆಪಿಗೆ ನುಂಗಲಾರದ ತುತ್ತಾಗಿದೆ.ವಿಶ್ವನಾಥ್ ಹೇಳಿಕೆಯನ್ನು ಕಾಂಗ್ರೆಸ್ ನಾಯಕರು ತಕ್ಷಣವೇ ಸ್ವಾಗತಿಸಿದ್ದು, ಬಿಜೆಪಿಯ ಯಾವುದೇ ಮುಖಂಡರು ಪ್ರತಿಕ್ರಿಯೆ ನೀಡಿಲ್ಲ.