ಕರ್ನಾಟಕದ ಜನರು ಗೂಂಡಾ ಆಡಳಿತದಿಂದ ಉತ್ತಮ ಆಡಳಿತದತ್ತ ಹೋಗಲು ಕಾತರಿಸುತ್ತಿದ್ದಾರೆ. ಚುನಾವಣೆ ಫಲಿತಾಂಶ ಬಂದ ದಿನ ಇದು ಗೊತ್ತಾಗುತ್ತದೆ. ಕರ್ನಾಟಕದಲ್ಲಿ ಈಗ ಕಾನೂನಿನ ಆಡಳಿತವಿಲ್ಲ. ಮಾಫಿಯಾ ಸರ್ಕಾರವಿದೆ. ಮುಸ್ಲಿಮರ ತುಷ್ಟೀಕರಣ ಜಾಸ್ತಿಯಾಗಿದೆ. ಪಿಎಫ್ಐ, ಎಸ್ಡಿಪಿಐ ದುಷ್ಕೃತ್ಯಗಳಿಗೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬೆಂಬಲ ನೀಡುತ್ತಿದೆ ಎಂದು ಅಮಿತ್ ಶಾ ವಾಗ್ದಾಳಿ ನಡೆಸಿದರು.