<p><strong>ಬೆಂಗಳೂರು:</strong> ‘ಜಗತ್ತಿನ ಹಲವು ದೇಶಗಳಲ್ಲಿ ಕವಿದಿರುವ ಯುದ್ಧದ ಕಾರ್ಮೋಡ ಸರಿಸಲು ಮಹಾವೀರರ ಅಹಿಂಸಾ ನೀತಿಗಳೇ ಪರಿಹಾರವಾಗಬಲ್ಲವು’ ಎಂದು ಸಾಹಿತಿ ಹಂಪ ನಾಗರಾಜಯ್ಯ ಹೇಳಿದರು.</p>.<p>ಕರ್ನಾಟಕ ಜೈನ ಅಸೋಸಿಯೇಷನ್ ಕೆ.ಆರ್. ರಸ್ತೆಯ ಕರ್ನಾಟಕ ಜೈನ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಭಗವಾನ್ ಮಹಾವೀರ ಜನ್ಮ ಕಲ್ಯಾಣ ಮಹೋತ್ಸವದಲ್ಲಿ ಅವರು ಮಾತನಾಡಿದರು.</p>.<p>‘ರಷ್ಯಾ ಹಾಗೂ ಉಕ್ರೇನ್, ಅಮೆರಿಕ, ಇಸ್ರೇಲ್ ಹಾಗೂ ಇರಾನ್ ದೇಶಗಳಲ್ಲಿ ಈಗ ಯುದ್ಧದ ವಾತಾವರಣವಿದೆ. ಇದು ಇಡೀ ಜಗತ್ತಿನಲ್ಲಿ ಆತಂಕ ಸೃಷ್ಟಿಸಿದೆ. ಯುದ್ಧೋನ್ಮಾದದಿಂದ ರಕ್ತಪಾತ ಉಂಟಾಗಿ ಹಲವರು ಜೀವ ಕಳೆದುಕೊಂಡಿದ್ದಾರೆ. ಪತಿಯನ್ನು ಕಳೆದುಕೊಂಡ ಮಹಿಳೆಯರ, ಅಪ್ಪ–ಅಮ್ಮನನ್ನು ಕಳೆದುಕೊಂಡ ಮಕ್ಕಳ ಸ್ಥಿತಿ ಹೇಳತೀರದ್ದು’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>‘ಮಹಾವೀರರು ಶತಮಾನಗಳ ಹಿಂದೆಯೇ ಅಹಿಂಸೆಯ ಸಂದೇಶವನ್ನು ಸಾರಿದರು. ಇದರಿಂದ ಜಗತ್ತಿನಲ್ಲಿ ಆಗಬಹುದಾದ ಅದೆಷ್ಟೋ ಅನಾಹುತಗಳು ತಪ್ಪಿವೆ. ಭಾರತದಲ್ಲಿ ಸ್ವಾತಂತ್ರ್ಯ ಪಡೆಯಲು ಮಹಾತ್ಮ ಗಾಂಧಿ ಅನುಸರಿಸಿದ ಅಹಿಂಸೆಯ ಮಂತ್ರವೂ ಕೂಡ ಜಗತ್ತಿಗೆ ಮಾದರಿ. ಇದನ್ನು ಎಲ್ಲಾ ದೇಶಗಳು ಅನುಸರಿಸಿದರೆ ಯುದ್ಧವೇ ಇರುವುದಿಲ್ಲ’ ಎಂದು ಹೇಳಿದರು.</p>.<p><strong>ಯುಪಿಎಸ್ಸಿ ಪರೀಕ್ಷೆಗೆ ತರಬೇತಿ ನೀಡಿ:</strong> ‘ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ ಪಾವತಿಸುವುದರಲ್ಲಿ ಜೈನ ಸಮುದಾಯ ಮುಂಚೂಣಿಯಲ್ಲಿದೆ. ಆಮದು, ರಫ್ತು ವ್ಯಾಪಾರದಲ್ಲೂ ಮುಂದಿದೆ. ಆದರೆ, ಮಕ್ಕಳು ಉತ್ತಮ ಶಿಕ್ಷಣ ಪಡೆಯುತ್ತಿದ್ದರೂ ಸಾರ್ವಜನಿಕ ಸೇವೆಗೆ ಹೆಚ್ಚು ಬಂದಿ ಬರುತ್ತಿಲ್ಲ. ಕರ್ನಾಟಕದಲ್ಲಿ ಒಂದು ಕಾಲಕ್ಕೆ ಜೈನ ಸಮುದಾಯದ ಏಳು ಐಎಎಸ್ ಅಧಿಕಾರಿಗಳಿದ್ದರು. ಈಗ ಒಬ್ಬರೇ ಇದ್ದಾರೆ. ಯುಪಿಎಸ್ಸಿ ಪರೀಕ್ಷೆಗಳಿಗೂ ಸಮುದಾಯದಿಂದ ತರಬೇತಿ ನೀಡಲು ಒತ್ತು ಕೊಡಬೇಕು’ ಎಂದು ಸಲಹೆ ನೀಡಿದರು.</p>.<p>ಶಿಕ್ಷಣ ತಜ್ಞ ಮುನಿರಾಜ ರೆಂಜಾಳ ಉಪನ್ಯಾಸ ನೀಡಿದರು.</p>.<p>ಮೂವರಿಗೆ ಪ್ರಶಸ್ತಿ ಪ್ರದಾನ ಲೋಕಾಯುಕ್ತದ ನಿವೃತ್ತ ರಿಜಿಸ್ಟ್ರಾರ್ ಎಂ.ಜೆ.ಇಂದ್ರಕುಮಾರ್ ನಿವೃತ್ತ ಎಂಜಿನಿಯರ್ ರಾಜಕೀರ್ತಿ ಎಸ್ಬಿಐ ನಿವೃತ್ತ ಸಹಾಯಕ ಮಹಾ ಪ್ರಬಂಧಕ ವೈ.ಎಸ್.ರಾಜೇಂದ್ರ ಕುಮಾರ್ ಅವರಿಗೆ ‘ಜೈನ ಸಮಾಜ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕನಕಗಿರಿ ಜೈನಪೀಠದ ಭುವನ ಕೀರ್ತಿ ಭಟ್ಟಾರಕ ಸ್ವಾಮೀಜಿ ನ್ಯಾಯಮೂರ್ತಿ ಎಂ.ಐ.ಅರುಣ್ ಐಎಎಸ್ ಅಧಿಕಾರಿ ಮನೋಜ್ ಜೈನ್ ಕರ್ನಾಟಕ ಜೈನ ಅಸೋಸಿಯೇಷನ್ ಅಧ್ಯಕ್ಷ ಎಸ್. ಜಿತೇಂದ್ರ ಕುಮಾರ್ ಕಾರ್ಯದರ್ಶಿ ಆಶಾ ಪ್ರಭು ಸಹ ಕಾರ್ಯದರ್ಶಿ ನೀರಜಾ ನಾಗೇಂದ್ರಕುಮಾರ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಜಗತ್ತಿನ ಹಲವು ದೇಶಗಳಲ್ಲಿ ಕವಿದಿರುವ ಯುದ್ಧದ ಕಾರ್ಮೋಡ ಸರಿಸಲು ಮಹಾವೀರರ ಅಹಿಂಸಾ ನೀತಿಗಳೇ ಪರಿಹಾರವಾಗಬಲ್ಲವು’ ಎಂದು ಸಾಹಿತಿ ಹಂಪ ನಾಗರಾಜಯ್ಯ ಹೇಳಿದರು.</p>.<p>ಕರ್ನಾಟಕ ಜೈನ ಅಸೋಸಿಯೇಷನ್ ಕೆ.ಆರ್. ರಸ್ತೆಯ ಕರ್ನಾಟಕ ಜೈನ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಭಗವಾನ್ ಮಹಾವೀರ ಜನ್ಮ ಕಲ್ಯಾಣ ಮಹೋತ್ಸವದಲ್ಲಿ ಅವರು ಮಾತನಾಡಿದರು.</p>.<p>‘ರಷ್ಯಾ ಹಾಗೂ ಉಕ್ರೇನ್, ಅಮೆರಿಕ, ಇಸ್ರೇಲ್ ಹಾಗೂ ಇರಾನ್ ದೇಶಗಳಲ್ಲಿ ಈಗ ಯುದ್ಧದ ವಾತಾವರಣವಿದೆ. ಇದು ಇಡೀ ಜಗತ್ತಿನಲ್ಲಿ ಆತಂಕ ಸೃಷ್ಟಿಸಿದೆ. ಯುದ್ಧೋನ್ಮಾದದಿಂದ ರಕ್ತಪಾತ ಉಂಟಾಗಿ ಹಲವರು ಜೀವ ಕಳೆದುಕೊಂಡಿದ್ದಾರೆ. ಪತಿಯನ್ನು ಕಳೆದುಕೊಂಡ ಮಹಿಳೆಯರ, ಅಪ್ಪ–ಅಮ್ಮನನ್ನು ಕಳೆದುಕೊಂಡ ಮಕ್ಕಳ ಸ್ಥಿತಿ ಹೇಳತೀರದ್ದು’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>‘ಮಹಾವೀರರು ಶತಮಾನಗಳ ಹಿಂದೆಯೇ ಅಹಿಂಸೆಯ ಸಂದೇಶವನ್ನು ಸಾರಿದರು. ಇದರಿಂದ ಜಗತ್ತಿನಲ್ಲಿ ಆಗಬಹುದಾದ ಅದೆಷ್ಟೋ ಅನಾಹುತಗಳು ತಪ್ಪಿವೆ. ಭಾರತದಲ್ಲಿ ಸ್ವಾತಂತ್ರ್ಯ ಪಡೆಯಲು ಮಹಾತ್ಮ ಗಾಂಧಿ ಅನುಸರಿಸಿದ ಅಹಿಂಸೆಯ ಮಂತ್ರವೂ ಕೂಡ ಜಗತ್ತಿಗೆ ಮಾದರಿ. ಇದನ್ನು ಎಲ್ಲಾ ದೇಶಗಳು ಅನುಸರಿಸಿದರೆ ಯುದ್ಧವೇ ಇರುವುದಿಲ್ಲ’ ಎಂದು ಹೇಳಿದರು.</p>.<p><strong>ಯುಪಿಎಸ್ಸಿ ಪರೀಕ್ಷೆಗೆ ತರಬೇತಿ ನೀಡಿ:</strong> ‘ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ ಪಾವತಿಸುವುದರಲ್ಲಿ ಜೈನ ಸಮುದಾಯ ಮುಂಚೂಣಿಯಲ್ಲಿದೆ. ಆಮದು, ರಫ್ತು ವ್ಯಾಪಾರದಲ್ಲೂ ಮುಂದಿದೆ. ಆದರೆ, ಮಕ್ಕಳು ಉತ್ತಮ ಶಿಕ್ಷಣ ಪಡೆಯುತ್ತಿದ್ದರೂ ಸಾರ್ವಜನಿಕ ಸೇವೆಗೆ ಹೆಚ್ಚು ಬಂದಿ ಬರುತ್ತಿಲ್ಲ. ಕರ್ನಾಟಕದಲ್ಲಿ ಒಂದು ಕಾಲಕ್ಕೆ ಜೈನ ಸಮುದಾಯದ ಏಳು ಐಎಎಸ್ ಅಧಿಕಾರಿಗಳಿದ್ದರು. ಈಗ ಒಬ್ಬರೇ ಇದ್ದಾರೆ. ಯುಪಿಎಸ್ಸಿ ಪರೀಕ್ಷೆಗಳಿಗೂ ಸಮುದಾಯದಿಂದ ತರಬೇತಿ ನೀಡಲು ಒತ್ತು ಕೊಡಬೇಕು’ ಎಂದು ಸಲಹೆ ನೀಡಿದರು.</p>.<p>ಶಿಕ್ಷಣ ತಜ್ಞ ಮುನಿರಾಜ ರೆಂಜಾಳ ಉಪನ್ಯಾಸ ನೀಡಿದರು.</p>.<p>ಮೂವರಿಗೆ ಪ್ರಶಸ್ತಿ ಪ್ರದಾನ ಲೋಕಾಯುಕ್ತದ ನಿವೃತ್ತ ರಿಜಿಸ್ಟ್ರಾರ್ ಎಂ.ಜೆ.ಇಂದ್ರಕುಮಾರ್ ನಿವೃತ್ತ ಎಂಜಿನಿಯರ್ ರಾಜಕೀರ್ತಿ ಎಸ್ಬಿಐ ನಿವೃತ್ತ ಸಹಾಯಕ ಮಹಾ ಪ್ರಬಂಧಕ ವೈ.ಎಸ್.ರಾಜೇಂದ್ರ ಕುಮಾರ್ ಅವರಿಗೆ ‘ಜೈನ ಸಮಾಜ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕನಕಗಿರಿ ಜೈನಪೀಠದ ಭುವನ ಕೀರ್ತಿ ಭಟ್ಟಾರಕ ಸ್ವಾಮೀಜಿ ನ್ಯಾಯಮೂರ್ತಿ ಎಂ.ಐ.ಅರುಣ್ ಐಎಎಸ್ ಅಧಿಕಾರಿ ಮನೋಜ್ ಜೈನ್ ಕರ್ನಾಟಕ ಜೈನ ಅಸೋಸಿಯೇಷನ್ ಅಧ್ಯಕ್ಷ ಎಸ್. ಜಿತೇಂದ್ರ ಕುಮಾರ್ ಕಾರ್ಯದರ್ಶಿ ಆಶಾ ಪ್ರಭು ಸಹ ಕಾರ್ಯದರ್ಶಿ ನೀರಜಾ ನಾಗೇಂದ್ರಕುಮಾರ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>