ಎಷ್ಟು ಉಜ್ಜಿದರೂ ದೇಹ ಸರಿಯಾಗಿ ಸ್ವಚ್ಛವಾಗುತ್ತಿಲ್ಲ ಎಂದು ಭಾವಿಸುವ ಯುವಕ, ಮತ್ತೆ ಮತ್ತೆ ಸ್ನಾನ ಮಾಡುತ್ತಿದ್ದ. ದಿನಕ್ಕೆ ಎರಡರಿಂದ ಮೂರು ಬಾರಿಯಾದರೂ ಸ್ನಾನ ಮಾಡುತ್ತಿರುವುದು ಕುಟುಂಬದ ಸದಸ್ಯರಿಗೆ ಆತಂಕ ಉಂಟುಮಾಡಿತ್ತು.ಇದರಿಂದಾಗಿ ಯುವಕನನ್ನು ಯಲಹಂಕದ ಪೀಪಲ್ ಟ್ರೀ ಮಾರ್ಗ ಆಸ್ಪತ್ರೆಗೆ ಕರೆದೊಯ್ದ ಕುಟುಂಬದ ಸದಸ್ಯರು, ಈ ಬಗ್ಗೆ ವೈದ್ಯರಿಗೆ ತಿಳಿಸಿದರು. ಡಾ.ಸತೀಶ್ ರಾಮಯ್ಯ ನೇತೃತ್ವದ ವೈದ್ಯರ ತಂಡ ಯುವಕ ಸ್ವಚ್ಛತೆಯ ಗೀಳಿನಿಂದ ಮುಕ್ತವಾಗುವುದಕ್ಕೆ ನೆರವಾಗಿದೆ.