ಇದಕ್ಕೆ ಕೆಂಡಾಮಂಡಲವಾದ ದಿನೇಶ್ ಮಾಹೇಶ್ವರಿ, "ಯಾರವರು, ಗಸ್ತು ಪೊಲೀಸರು ಏನು ಮಾಡುತ್ತಿದ್ದಾರೆ. ಇಂತಹವರನ್ನು ಸುಮ್ಮನೇ ಬಿಡಬೇಡಿ. ರಂಗೋಲಿ ಮೇಲೂ ಕಸ ಚೆಲ್ಲಿದವರ ವಿರುದ್ಧ ಪೌರಾಡಳಿತ ಕಾಯ್ದೆ ಪ್ರಕಾರ ಕ್ರಿಮಿನಲ್ ಕೇಸು ಹಾಕಿ. ಶಿಕ್ಷೆಯಾಗುವಂತೆ ನೋಡಿಕೊಳ್ಳಿ. ಇದು ಕಾನೂನಿಗೆ ತೋರಿರುವ ಅಗೌರವ. ಇವರೆಲ್ಲಾ ಏನಂದುಕೊಂಡಿದ್ದಾರೆ, ಒಂಚೂರು ನಾಗರಿಕ ಪ್ರಜ್ಞೆ ಇಲ್ಲವೇ" ಎಂದು ನಂಜುಂಡರೆಡ್ಡಿ ಮತ್ತು ಅಡ್ವೊಕೇಟ್ ಜನರಲ್ ಉದಯ ಹೊಳ್ಳ ಅವರನ್ನು ಖಾರವಾಗಿ ಪ್ರಶ್ನಿಸಿದರು.