ಅರ್ಜಿದಾರರ ಪರ ವಕೀಲರು, ‘ಬೆಂಗಳೂರು ನಗರ ಜಿಲ್ಲೆಯ ಪ್ರಧಾನ ನ್ಯಾಯಾಧೀಶರ ವಿಶೇಷ ಕೋರ್ಟ್ ಐಎಂಎ ಪ್ರಕರಣದ ಜೊತೆಗೇ, ಬಿಯುಡಿಎಸ್ (ಅನಿಯಂತ್ರಿತ ಹೂಡಿಕೆ ಸ್ಕೀಂಗಳ ನಿಷೇಧ) ಮತ್ತು ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಹೂಡಿಕೆದಾರರ ಹಿತರಕ್ಷಣಾ (ಕೆಪಿಐಡಿ) ಕಾಯ್ದೆ ಅಡಿಯಲ್ಲಿನ ನೂರಾರು ಪ್ರಕರಣಗಳನ್ನು ವಿಚಾರಣೆ ನಡೆಸುತ್ತಿದೆ. ಆಡಳಿತಾತ್ಮಕ ಹೊರೆಯೂ ಹೆಚ್ಚಿದೆ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.