ಇದನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಓಕಾ ಅವರು, ಬಿಬಿಎಂಪಿ ಮತ್ತು ರಾಜ್ಯ ಸರ್ಕಾರದ ವಕೀಲರನ್ನು ಉದ್ದೇಶಿಸಿ, ‘184 ಕೆರೆಗಳಲ್ಲಿ ಎಷ್ಟು ಕೆರೆಗಳ ಪುನರುಜ್ಜೀವನ ಕಾರ್ಯ ಕೈಗೊಳ್ಳಲಾಗಿದೆ. ಇವುಗಳಿಗೆ ತ್ಯಾಜ್ಯ ನೀರನ್ನು ಏನಾದರೂ ಹರಿಯಬಿಡಲಾಗುತ್ತಿದೆಯೇ ಹೇಗೆ ಎಂದು ನಾಳೆಯೇ ತಿಳಿಸಬೇಕು’ ಎಂದು ನಿರ್ದೇಶಿಸಿದರು.