‘ಇದೊಂದು ಗಂಭೀರ ಪ್ರಕರಣ. ಅಸ್ತಿತ್ವದಲ್ಲಿಲ್ಲದ ಜಮೀನುಗಳಿಗೂ ಟಿಡಿಆರ್ ನೀಡಲಾಗಿದೆ. ಇದರಿಂದ ಸರ್ಕಾರದ ಖಜಾನೆಗೆ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದೆ. ಅರ್ಜಿ ದಾರರು ಸರ್ಕಾರಿ ಅಧಿಕಾರಿಯಾಗಿದ್ದು, ಈ ಪ್ರಕರಣದಲ್ಲಿ ಯಾರೆಲ್ಲ ಇದ್ದಾರೆ ಎಂಬ ಅಂಶಗಳು ತನಿಖೆ ಪೂರ್ಣಗೊಂಡ ನಂತರವೇ ಬೆಳಕಿಗೆ ಬರಲಿವೆ. ಆದ್ದರಿಂದ ಪ್ರಕರಣ ರದ್ದುಪಡಿಸಬಾರದು’ ಎಂಬ ಎಸಿಬಿ ಪರ ವಕೀಲರ ವಾದವನ್ನು ನ್ಯಾಯಪೀಠ ಮಾನ್ಯ ಮಾಡಿದೆ.