ಹುಬ್ಬಳ್ಳಿಯ ನರರೋಗ ತಜ್ಞ ಡಾ. ವಿನೋದ್ ಜಿ. ಕುಲಕರ್ಣಿ ಈ ಅರ್ಜಿ ಸಲ್ಲಿಸಿದ್ದು, ‘ರೋಗಿಗಳಲ್ಲಿ ಆತ್ಮಹತ್ಯೆ ಆಲೋಚನೆಗಳನ್ನು ತೆಗೆದು ಹಾಕಬಹುದಾದ ಈ ಚಿಕಿತ್ಸೆಯನ್ನು ಮಾನಸಿಕ ಆರೋಗ್ಯ ಕಾಯ್ದೆ 2017ರ ಸೆಕ್ಷನ್ 94(3)ರ ಅಡಿಯಲ್ಲಿ ನಿರ್ಬಂಧಿಸಲಾಗಿದೆ. ಮಾನಸಿಕವಾಗಿ ತೀರಾ ಖಿನ್ನರಾದವರಿಗೆ ಈ ಚಿಕಿತ್ಸೆ ನೀಡಿ ಅವರ ಜೀವ ಉಳಿಸಬಹುದು’ ಎಂದು ಪ್ರತಿಪಾದಿಸಿದ್ದಾರೆ.