ಇದಕ್ಕೂ ಮುನ್ನ ಎಆರ್ಟಿಎಸ್
ಪರ ಹಿರಿಯ ವಕೀಲೆ ಜಯ್ನಾ ಕೊಠಾರಿ, ‘ರಸ್ತೆ ಗುಂಡಿ ಮುಚ್ಚಲು ಪೈಥಾನ್
ಯಂತ್ರ ಬಳಸುವುದಕ್ಕೆ ಲೋಕೋಪಯೋಗಿ ಇಲಾಖೆ ನಿಗದಿಪಡಿಸಿರುವ ಪ್ರತಿ ಗಂಟೆಗೆ ₹1,249 ನೀಡುವಂತೆ ಎಆರ್ಟಿಎಸ್ ಕೋರಿದೆ. ಆದರೆ, ಬಿಬಿಎಂಪಿ
ಕಡಿಮೆ ಹಣ ಪಾವತಿಸಲು ಮುಂದಾಗಿದೆ. ಇದೇ ವಿಚಾರವಾಗಿ ಸಮಾಲೋಚಿಸಲು ಮೇ 27ರಂದು ಕರೆದಿದ್ದ ಸಭೆಯಲ್ಲಿ ಬಿಬಿಎಂಪಿ
ರಸ್ತೆ ಮೂಲಸೌಕರ್ಯ ವಿಭಾಗದ
ಮುಖ್ಯ ಎಂಜಿನಿಯರ್ ಬಿ.ಎಸ್. ಪ್ರಹ್ಲಾದ್, ಎಆರ್ಟಿಎಸ್ ಕಂಪನಿಯ ವ್ಯವಸ್ಥಾಪಕಿಯ ಪತಿಯ ಮೇಲೆ
ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದವರು ಕಂಪನಿಯ ನಿರ್ದೇಶಕರಾಗಿದ್ದಾರೆ. ಈ ಸಂಬಂಧ
ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಪ್ರಹ್ಲಾದ್ ವಿರುದ್ಧ ಲಿಖಿತ
ದೂರು ನೀಡಿದ್ದಾರೆ’ ಎಂದು ವಿವರಿಸಿದರು.