ವಿಚಾರಣೆ ವೇಳೆ ಚುನಾವಣಾ ಆಯೋಗದ ಪರ ವಾದ ಮಂಡಿಸಿದ ಹಿರಿಯ ವಕೀಲ ಕೆ.ಎನ್. ಫಣೀಂದ್ರ, ‘ಯಾವಾಗ ಮೀಸಲು ನಿಗದಿ ಮಾಡಿಕೊಡುತ್ತೇವೆ ಎಂಬ ಬಗ್ಗೆ ಸರ್ಕಾರ ಉತ್ತರ ನೀಡುತ್ತಿಲ್ಲ. ವಾರ್ಡ್ ಪುನರ್ ವಿಂಗಡಣೆ ಜೊತೆಗೆ ಮೀಸಲು ಪಟ್ಟಿಯನ್ನೂ ನೀಡದೇ ಹೋದರೆ, ಸಕಾಲದಲ್ಲಿ ಚುನಾವಣೆ ನಡೆಸಲು ಸಾಧ್ಯವಿಲ್ಲ’ ಎಂದು ತಿಳಿಸಿದರು.