‘ಭಾಷಾವಾರು ಪ್ರಾಂತ್ಯಗಳ ಆಧಾರದ ಮೇಲೆ ದೇಶ ರಚನೆಯಾಗಿದೆ. ಆದರೆ, ಸ್ವಾತಂತ್ರ್ಯಾ ನಂತರ ಕೇಂದ್ರದಲ್ಲಿ ಆಡಳಿತ ನಡೆಸಿರುವ ಎಲ್ಲಾ ಪಕ್ಷಗಳು ಸೆಪ್ಟೆಂಬರ್ ತಿಂಗಳಲ್ಲಿ ಹಿಂದಿ ಸಪ್ತಾಹ ಮತ್ತು ಸೆ. 14ರಂದು ಹಿಂದಿ ದಿವಸ್ ಆಚರಣೆ ಮಾಡುತ್ತಿವೆ. ದೇಶದ ಎಲ್ಲಾ ಭಾಷೆಯ ಜನರ ತೆರಿಗೆ ಹಣದಲ್ಲಿ ಕೇಂದ್ರ ಸರ್ಕಾರ ಹಿಂದಿಯೇತರ ರಾಜ್ಯಗಳಲ್ಲಿ ನಡೆಸುವ ಹಿಂದಿ ದಿವಸ್ ಆಚರಣೆಯನ್ನು ವಿರೋಧಿಸಿ ಬುಧವಾರ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ಮಾಡ
ಲಾಗುವುದು’ ಎಂದು ಕರವೇ (ಟಿ.ಎ. ನಾರಾಯಣಗೌಡ) ಬಣ ತಿಳಿಸಿದೆ.