‘ಈ ಅಧಿವೇಶನದಲ್ಲಿ ಲವ್ ಜಿಹಾದ್, ಹಲಾಲ್ ಜಿಹಾದ್, ಲ್ಯಾಂಡ್ ಜಿಹಾದ್, ಹಿಂದೂ ಕಾರ್ಯಕರ್ತರ ಹತ್ಯೆ, ಇತಿಹಾಸದ ವಿಕೃತೀಕರಣ, ಹಿಂದೂ ಧರ್ಮ ಪರಂಪರೆಗಳ ಮೇಲೆ ಆಘಾತ, ದೇವಸ್ಥಾನಗಳ ಸರ್ಕಾರೀಕರಣ, ಗೋರಕ್ಷಣೆ ಸೇರಿ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ’ ಎಂದು ಸಮಿತಿಯ ವಕ್ತಾರ ಮೋಹನ್ ಗೌಡ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.