ಮೈಸೂರು: ಬಂದೂಕು ಖರೀದಿಸಿ ರಾಜಕಾರಣಿಗಳನ್ನು ಬೆದರಿಸಲು ಮುಂದಾಗಿದ್ದ ನಾಲ್ವರನ್ನು ನಂಜನಗೂಡು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಒಂದು ಬಂದೂಕು ಹಾಗೂ 12 ಗುಂಡು ವಶಪಡಿಸಿಕೊಳ್ಳಲಾಗಿದೆ.
ನಂಜನಗೂಡಿನವರಾದ ಬಿಜೆಪಿ ಕಾರ್ಯಕರ್ತ, ರೌಡಿ ಶೀಟರ್ ಧನರಾಜ್ ಬೋಲಾ, ಶಾಹಿನ್ಯಾ ಮತ್ತು ಸಾಧಿಕ್ ಪಾಷ ಎಂಬುವರು ಮೈಸೂರಿನ ಕೇಂದ್ರ ಕಾರಾಗೃಹದಲ್ಲಿರುವ ಕೈದಿ ಅಫ್ಸರ್ ಖಾನ್ನನ್ನು ಭೇಟಿಯಾಗಿದ್ದಾರೆ. ₹ 60 ಸಾವಿರ ಹಣ ಪಾವತಿಸಿ ಬಂದೂಕು ಮಾರುವವರ ಮೊಬೈಲ್ ಸಂಖ್ಯೆ ಪಡೆದುಕೊಂಡಿದ್ದಾರೆ.
ಖಚಿತ ಮಾಹಿತಿಯ ಆಧಾರದ ಮೇಲೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂದೂಕು ಮಾರಾಟ ಜಾಲದಲ್ಲಿ ಅಫ್ಸರ್ ಖಾನ್ ಪಾತ್ರವೂ ಇರುವುದು ಬೆಳಕಿಗೆ ಬಂದಿದೆ.