‘ಒಂದು ವೇಳೆ ಮೇಳ ನಿಗದಿಯಾಗಿರುವ ಸಮಯಕ್ಕೆ ಕೋವಿಡ್ ಪ್ರಭಾವ ತಗ್ಗಿದರೆ, ಸೀಮಿತ ಮಂದಿಗೆ ಮಾತ್ರ ಮೇಳಕ್ಕೆ ಪ್ರವೇಶ ನೀಡಲಿದ್ದೇವೆ. ಜಿಲ್ಲಾವಾರು ರೈತರಿಗೆ ನಿಗದಿತ ದಿನದಂದು ಮೇಳ ವೀಕ್ಷಣೆಗೆ ಅವಕಾಶ ಕಲ್ಪಿಸುವ ಚಿಂತನೆ ಇದೆ. ಮೇಳದಲ್ಲಿ ಪ್ರದರ್ಶನ ಮಳಿಗೆಗಳನ್ನು ಹಾಕಲು ಹಲವರು ಆಸಕ್ತಿ ತೋರಿದ್ದರು. ಭೌತಿಕ ಮೇಳ ರದ್ದಾಗಿರುವುದರಿಂದ ಅವರು ಮುಂಗಡವಾಗಿ ನೀಡಿದ್ದ ಹಣ ಹಿಂತಿರುಗಿಸಲಾಗಿದೆ’ ಎಂದು ಮಾಹಿತಿ ನೀಡಿದರು.