‘ಹೊಸಕೆರೆಹಳ್ಳಿ ಕೆರೆಯನ್ನು ಸ್ವಚ್ಛ ವಾಗಿಡಲು ಮತ್ತು ಕಸ ಸೇರದಂತೆ ಮಾಡುವ ಕಾರ್ಯಕ್ರಮದಲ್ಲಿ ಭಾಗಿ ಯಾಗಲು 29 ಜನರು ‘ನಮ್ಮ ಕ್ಲೀನ್ ಬೆಂಗಳೂರು’ ವೆಬ್ಸೈಟ್ನಲ್ಲಿ (ಸಿಟಿಜನ್ ಎಂಗೇಜ್ಮೆಂಟ್ ಪ್ಲಾಟ್ಫಾರ್ಮ್) ನೋಂದಾಯಿಸಿಕೊಂಡಿದ್ದರು. ಅವರಿಗೆ ಎಲ್ಲ ಮಾಹಿತಿ ನೀಡಲಾಗಿದೆ. ನಗರದಲ್ಲಿ ಕಸ ಪ್ರಮುಖ ಸಮಸ್ಯೆಯಾಗಿದೆ. ಇತ್ತೀ ಚಿನ ಅಧ್ಯಯನದ ಪ್ರಕಾರ ನಗರದಲ್ಲಿ ಕಸ ಸುಡುವ ಪ್ರಕ್ರಿಯೆಯಿಂದ ಮಾಲಿ ನ್ಯಕ್ಕೆ ಶೇ 16.1ರಷ್ಟು ಕಾರಕಗಳು ಸೇರುತ್ತಿವೆ. ಭವಿಷ್ಯದಲ್ಲಿ ಸುರಕ್ಷಿತ ಮತ್ತು ಸ್ವಚ್ಛ ನಗರಗಳನ್ನು ರಚಿಸಲು ಬಿಬಿಎಂಪಿಯೊಂದಿಗೆ ಕೈಜೋಡಿಸುವ ನಾಗರಿಕರಿಗಾಗಿ ಕಾರ್ಯಕ್ರಮಗಳನ್ನು ರೂಪಿಸಿ, ಅರಿವು ಮೂಡಿಸಲಾಗುತ್ತದೆ’ ಎಂದು jhatkaa.orgಯ ಚಿಕು ಅಗರ್ವಾಲ್ ಹೇಳಿದರು.