‘ಯಲ್ಲಮ್ಮ ಶರಾಬ್ ಮುನಿಶಾಮಯ್ಯ ಬಡಾವಣೆಯ ಕಣ್ಣೂರಹಳ್ಳಿ ರಸ್ತೆಯ ನಿವಾಸಿಯಾಗಿರುವ ವಿನೋದ್ ಎಂಬುವರು ಗುರುವಾರ ಕೆಲಸಕ್ಕೆ ಹೋಗಿದ್ದರು. ಈ ವೇಳೆ ಮನೆಗೆ ನುಗ್ಗಿದ್ದ ದುಷ್ಕರ್ಮಿಗಳು ವಿನೋದ್ ಪತ್ನಿ ಸೌಂದರ್ಯ ಹಾಗೂ ತಾಯಿ ಬಸಮ್ಮ ಎಂಬುವರ ಕೈ ಕಾಲು ಕಟ್ಟಿಹಾಕಿದ್ದರು. ಬಳಿಕ ಮನೆಯ ಬೀರುವಿನಲ್ಲಿ ಇಟ್ಟಿದ್ದ 200 ಗ್ರಾಂ ಚಿನ್ನದ ಆಭರಣ ಹಾಗೂ ₹2 ಲಕ್ಷ ನಗದು ದೋಚಿಕೊಂಡು ಪರಾರಿಯಾಗಿದ್ದಾರೆ. ಪೊಲೀಸರಿಗೆ ವಿಷಯ ತಿಳಿಸಿದರೆ ಕೊಲೆ ಮಾಡುವುದಾಗಿಯೂ ಹೆದರಿಸಿದ್ದರು’ ಎಂದು ಪೊಲೀಸರು ಹೇಳಿದ್ದಾರೆ.