ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಸಂಸ್ಥೆಯ ಗೌರವಾಧ್ಯಕ್ಷ ರಂಗಶ್ರೀ ರಂಗಸ್ವಾಮಿ, ‘ಕೊರೊನಾ ಸಂದರ್ಭದಲ್ಲಿ ನೆರವಾದ ಸಮಾಜ ಸೇವಕರಿಗೆ, ಆಶಾಕಾರ್ಯಕರ್ತರಿಗೆ ಮತ್ತು ಪೌರಕಾರ್ಮಿಕರಿಗೆ ವಾರ್ಷಿಕೋತ್ಸವದ ಪ್ರಯುಕ್ತ ಸನ್ಮಾನ ಏರ್ಪಡಿಸಿದ್ದೇವೆ. ಕಲಾವಿದ ಹೊನ್ನವಳ್ಳಿ ಕೃಷ್ಣ ಅವರಿಗೆ ದಿವಂಗತ ಪುನೀತ್ ರಾಜ್ಕುಮಾರ್ ಹೆಸರಿನಲ್ಲಿ ‘ರಾಜರತ್ನ’ ಪ್ರಶಸ್ತಿ ಪ್ರದಾನ ಮಾಡಲಿದ್ದೇವೆ. ನೇತ್ರದಾನ ನೋಂದಣಿಯೂ ನಡೆಯಲಿದೆ. ಅಂಗವಿಕಲರಿಗೆ ಗಾಲಿಕುರ್ಚಿ, 25 ಮಂದಿ ಬಡವರಿಗೆ ತಲಾ ₹ 5 ಸಾವಿರ ಸಹಾಯಧನ, ಮೃತ ಯೋಧರ ಕುಟುಂಬದವರಿಗೆ ಗೌರವಧನ ಮತ್ತು ಬಡವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಸಾಮಗ್ರಿ ವಿತರಿಸಲಿದ್ದೇವೆ’ ಎಂದರು.