‘ಬೀಡಾಡಿ ದನಗಳು, ಬೀದಿನಾಯಿಗಳು ಮತ್ತು ನಿಶ್ಯಕ್ತ ಪ್ರಾಣಿಗಳ ರಕ್ಷಣೆಯು ಸಾರ್ವಜನಿಕರ ಹೊಣೆ. ಕೆಲವು ಮಾಲೀಕರು ತಮ್ಮ ಮುದ್ದು ಪ್ರಾಣಿಗಳನ್ನು (ಪೆಟ್ ಅನಿಮಲ್ಸ್) ನಿರ್ಲಕ್ಷ್ಯ ಮಾಡಿರುವುದೂ ಕ೦ಡು ಬಂದಿದೆ. ಆದ್ದರಿ೦ದ, ಜಿಲ್ಲಾ ಪ್ರಾಣಿ ದಯಾ ಸಂಘಗಳು ತಮ್ ಜಿಲ್ಲೆಯ ಸರ್ಕಾರೇತರ ಸಂಸ್ಥೆಗಳನ್ನು ಸಂಪರ್ಕಿಸಿ ಅವರ ನೆರವಿನೊಂದಿಗೆ ಬಿಡಾಡಿ ದನಗಳು, ಬೀದಿನಾಯಿಗಳು, ಪ್ರಾಣಿ, ಪಕ್ಷಿಗಳು ಹಾಗೂ ಜಾನುವಾರುಗಳಿಗೆ ಲಾಕ್ಡೌನ್ ಅವಧಿಯಲ್ಲಿ ಆಹಾರ, ನೀರು, ಆಶ್ರಯ ಒದಗಿಸಿ ಅವುಗಳ ಆರೈಕೆಗೆ ಕ್ರಮಕೈಗೊಳ್ಳಬೇಕು’ ಎಂದು ಮಂಡಳಿ ಮನವಿ ಮಾಡಿದೆ.