ಐಎಂಎ ಕಂಪನಿಯಲ್ಲಿ ಗ್ರಾಹಕರು ಹೂಡಿಕೆ ಮಾಡಿದ್ದ ಹಣವನ್ನು ಮನ್ಸೂರ್ನಿಂದ ಪಡೆದು ಮಾಲೂರಿನಲ್ಲಿ 1.5 ಎಕರೆ ಜಮೀನು ಖರೀದಿಸಿ, ಅಲ್ಲಿ ಸಿಮೆಂಟ್ ಬ್ಲಾಕ್ಗಳನ್ನು ತಯಾರಿಸುವ ಕಾರ್ಖಾನೆಯನ್ನು ಖಮರುಲ್ಲಾ ನಡೆಸುತ್ತಿದ್ದ. ಅಲ್ಲದೆ, ಹೂಡಿಕೆದಾರರಿಂದ ಮನ್ಸೂರ್ ಕೈ ಸೇರುತ್ತಿದ್ದ ಹಣವನ್ನು ರಹಸ್ಯವಾಗಿ, ಇದೇ ಉದ್ದೇಶಕ್ಕಾಗಿ ತಯಾರಿಸಲಾಗಿದ್ದ ಬಂಕರ್ಗಳಲ್ಲಿ ಮುಚ್ಚಿಡುತ್ತಿದ್ದ. ಅದನ್ನು ಕಾಯಲು ಗನ್ಮ್ಯಾನ್ಗಳನ್ನು ನೇಮಕ ಮಾಡಿಕೊಂಡಿದ್ದ. ಈ ಸ್ಥಳವನ್ನು ಪತ್ತೆ ಮಾಡಲಾಗಿದೆ ಎಂದು ಎಸ್ಐಟಿ ಅಧಿಕಾರಿಗಳು ತಿಳಿಸಿದರು.