ವಿವಿಧ ನಾಲ್ಕು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಶುಕ್ರವಾರ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಹಾಗೂ ನ್ಯಾ. ಪ್ರದೀಪ್ ಸಿಂಗ್ ಯೆರೂರ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿ ದ್ದವು. ಅರ್ಜಿ ವಿಚಾರಣೆ ತಾವಿ ರುವ ನ್ಯಾಯಪೀಠದಲ್ಲಿ ಬೇಡ ಎಂದು ನ್ಯಾ. ಯೆರೂರ್ ಮನವಿ ಮಾಡಿದರು. ಹೀಗಾಗಿ ಎಲ್ಲಾ ಅರ್ಜಿಗಳನ್ನು ನ್ಯಾ.ಯೆರೂರ್ ಅವರು ಇಲ್ಲದ ನ್ಯಾಯಪೀಠದಲ್ಲಿ ವಿಚಾರಣೆ ಬರುವಂತೆ ಬೇರೆ ನ್ಯಾಯಪೀಠ ರಚಿಸುವಂತೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ಗೆ ನಿರ್ದೇಶನ ನೀಡಿ, ಮುಖ್ಯ ನ್ಯಾಯಮೂರ್ತಿ ಅವರು ವಿಚಾರಣೆ ಮುಂದೂಡಿದರು.