<p><strong>ಬೆಂಗಳೂರು</strong>: ‘ಗುರು ಹಿರಿಯರಿಗೆ ಗೌರವ ನೀಡಿ ವಿನಯವಂತಿಕೆಯನ್ನು ಬದುಕಿನಲ್ಲು ರೂಢಿಸಿಕೊಂಡ ವ್ಯಕ್ತಿ ಜೀವನದಲ್ಲಿ ಉನ್ನತ ಗೌರವ ಪಡೆದು ಎತ್ತರಕ್ಕೆ ಬೆಳೆಯುತ್ತಾನೆ’ ಎಂದು ಸಂಗೀತ ವಿದುಷಿ ಟಿ.ಎಸ್. ಸತ್ಯವತಿ ಹೇಳಿದರು.</p><p>ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಭಾನುವಾರ ನಾದವೈಭವ ಸಂಗೀತ ವಿದ್ಯಾಲಯ ಹಮ್ಮಿಕೊಂಡಿದ್ದ ಶ್ರೀ ಪುರಂದರದಾಸ ಹಾಗೂ ತ್ಯಾಗರಾಜರ ಆರಾಧನೆ ಸಂದರ್ಭ ಸ್ಮೃತಿ ಚಂದ್ರಿಕಾ ಫೌಂಡೇಷನ್ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.</p><p>‘ಜೀವನದಲ್ಲಿ ಮನುಷ್ಯತ್ವ, ಹಿರಿಯರೊಂದಿಗೆ ಸತ್ಸಂಗ ಮತ್ತು ಮೋಕ್ಷ ಪ್ರಾಪ್ತವಾಗುವುದು ಬಹಳ ಕಷ್ಟ. ವಿವಿಧ ಕಲೆಗಳಲ್ಲಿ ಸಂಗೀತವು ಮೋಕ್ಷ ಸಾಧನೆಗೆ ಪೂರಕ ಎನ್ನುತ್ತಾರೆ. ಆದರೆ ಸತ್ಸಂಗ ಇದ್ದರೆ ಮಾತ್ರ ಅದು ಸುಲಭವಾಗುತ್ತದೆ‘ ಎಂದು ತಿಳಿಸಿದರು.</p><p>ವಿದುಷಿ ಮೈಸೂರು ನಾಗಮಣಿ ಶ್ರೀನಾಥ್ ಮಾತನಾಡಿ, ‘ನಾನು ಹಲವರಿಗೆ ಪಾಠ ಮಾಡಿ ಅವರಿಂದಲೇ ಅನೇಕ ಗುಣ, ಹೊಸತನ ಕಲಿತಿದ್ದೇನೆ. ಚಂದ್ರಿಕಾ ಹೆಸರಿನಲ್ಲಿ ಕುಟುಂಬದವರು ಫೌಂಡೇಷನ್ ಆರಂಭಮಾಡಿರುವುದು ಮಾದರಿ ಕಾರ್ಯ. ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರಕ್ಕೆ ಇವೆಲ್ಲವೂ ಉತ್ತಮ ಕೊಡುಗೆ’ ಎಂದರು.</p><p>ವಿದ್ವಾಂಸರಾದ ಜಿ.ಎನ್.ನಾಗಮಣಿ ಶ್ರೀನಾಥ್, ಲಾಲ್ಗುಡಿ ರಾಜಲಕ್ಷ್ಮಿ ಟಿ.ಟಿ. ಶ್ರೀನಿವಾಸನ್, ಗೀತಾ ರಮಾನಂದ್, ವಸಂತಮಾಧವಿ, ಪುಸ್ತಕಂ ರಮಾ, ಬಿ.ಕೆ. ಅನಂತರಾಮ್, ರವಿಶಂಕರ್ ಶರ್ಮ ಅವರಿಗೆ ಸ್ಮೃತಿ ಚಂದ್ರಿಕಾ ಪುರಸ್ಕಾರ ನೀಡಿ ಗೌರವಿಸಲಾಯಿತು.</p><p>ಸಂಗೀತ ವಿದ್ವಾಂಸ ಆನೂರು ಅನಂತಕೃಷ್ಣ ಶರ್ಮ, ಸಂಸ್ಥೆ ಸಂಚಾಲಕರಾದ ಉಮೇಶ್ ಡಿ.ಎಸ್ ಮತ್ತು ಸಿ.ಆರ್ ರವಿಶಂಕರ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಗುರು ಹಿರಿಯರಿಗೆ ಗೌರವ ನೀಡಿ ವಿನಯವಂತಿಕೆಯನ್ನು ಬದುಕಿನಲ್ಲು ರೂಢಿಸಿಕೊಂಡ ವ್ಯಕ್ತಿ ಜೀವನದಲ್ಲಿ ಉನ್ನತ ಗೌರವ ಪಡೆದು ಎತ್ತರಕ್ಕೆ ಬೆಳೆಯುತ್ತಾನೆ’ ಎಂದು ಸಂಗೀತ ವಿದುಷಿ ಟಿ.ಎಸ್. ಸತ್ಯವತಿ ಹೇಳಿದರು.</p><p>ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಭಾನುವಾರ ನಾದವೈಭವ ಸಂಗೀತ ವಿದ್ಯಾಲಯ ಹಮ್ಮಿಕೊಂಡಿದ್ದ ಶ್ರೀ ಪುರಂದರದಾಸ ಹಾಗೂ ತ್ಯಾಗರಾಜರ ಆರಾಧನೆ ಸಂದರ್ಭ ಸ್ಮೃತಿ ಚಂದ್ರಿಕಾ ಫೌಂಡೇಷನ್ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.</p><p>‘ಜೀವನದಲ್ಲಿ ಮನುಷ್ಯತ್ವ, ಹಿರಿಯರೊಂದಿಗೆ ಸತ್ಸಂಗ ಮತ್ತು ಮೋಕ್ಷ ಪ್ರಾಪ್ತವಾಗುವುದು ಬಹಳ ಕಷ್ಟ. ವಿವಿಧ ಕಲೆಗಳಲ್ಲಿ ಸಂಗೀತವು ಮೋಕ್ಷ ಸಾಧನೆಗೆ ಪೂರಕ ಎನ್ನುತ್ತಾರೆ. ಆದರೆ ಸತ್ಸಂಗ ಇದ್ದರೆ ಮಾತ್ರ ಅದು ಸುಲಭವಾಗುತ್ತದೆ‘ ಎಂದು ತಿಳಿಸಿದರು.</p><p>ವಿದುಷಿ ಮೈಸೂರು ನಾಗಮಣಿ ಶ್ರೀನಾಥ್ ಮಾತನಾಡಿ, ‘ನಾನು ಹಲವರಿಗೆ ಪಾಠ ಮಾಡಿ ಅವರಿಂದಲೇ ಅನೇಕ ಗುಣ, ಹೊಸತನ ಕಲಿತಿದ್ದೇನೆ. ಚಂದ್ರಿಕಾ ಹೆಸರಿನಲ್ಲಿ ಕುಟುಂಬದವರು ಫೌಂಡೇಷನ್ ಆರಂಭಮಾಡಿರುವುದು ಮಾದರಿ ಕಾರ್ಯ. ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರಕ್ಕೆ ಇವೆಲ್ಲವೂ ಉತ್ತಮ ಕೊಡುಗೆ’ ಎಂದರು.</p><p>ವಿದ್ವಾಂಸರಾದ ಜಿ.ಎನ್.ನಾಗಮಣಿ ಶ್ರೀನಾಥ್, ಲಾಲ್ಗುಡಿ ರಾಜಲಕ್ಷ್ಮಿ ಟಿ.ಟಿ. ಶ್ರೀನಿವಾಸನ್, ಗೀತಾ ರಮಾನಂದ್, ವಸಂತಮಾಧವಿ, ಪುಸ್ತಕಂ ರಮಾ, ಬಿ.ಕೆ. ಅನಂತರಾಮ್, ರವಿಶಂಕರ್ ಶರ್ಮ ಅವರಿಗೆ ಸ್ಮೃತಿ ಚಂದ್ರಿಕಾ ಪುರಸ್ಕಾರ ನೀಡಿ ಗೌರವಿಸಲಾಯಿತು.</p><p>ಸಂಗೀತ ವಿದ್ವಾಂಸ ಆನೂರು ಅನಂತಕೃಷ್ಣ ಶರ್ಮ, ಸಂಸ್ಥೆ ಸಂಚಾಲಕರಾದ ಉಮೇಶ್ ಡಿ.ಎಸ್ ಮತ್ತು ಸಿ.ಆರ್ ರವಿಶಂಕರ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>