ರಾಜ್ಯದಲ್ಲಿ ಭೀಕರ ನೆರೆ ಹಾನಿ ಸಂಭವಿಸಿರುವಾಗ ವಿಜೃಂಭಣೆಯಿಂದ ಆಚರಣೆ ಮಾಡಬೇಕು ಎಂದು ಸೂಚಿಸುವುದು ತಪ್ಪು. ಸರಳವಾಗಿ ಆಚರಿಸಿ, ಉಳಿತಾಯವಾಗುವ ಹಣವನ್ನು ನೆರೆ ಪರಿಹಾರಕ್ಕೆ ನೀಡುವ ವ್ಯವಸ್ಥೆ ಮಾಡಿದರೆ ಅದು ಮಾದರಿ ಆಚರಣೆಯಾಗುತ್ತದೆ ಎಂದು ‘ಕಾಮ್ಸ್’ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಅವರು ಸಲಹೆ ನೀಡಿದ್ದಾರೆ.