ರಿಚ್ಮಂಡ್, ಸಜ್ಜನ್ ರಾವ್,ರಾಜರಾಮ್ ಮೋಹನ್ ರಾಯ್ ಸೇರಿ ವಿವಿಧ ವೃತ್ತಗಳನ್ನು ಕೇಸರಿ, ಬಿಳಿ, ಹಸಿರು ಬಟ್ಟೆ ಹಾಗೂ ಬಲೂನುಗಳಿಂದ ಅಲಂಕರಿಸಲಾಗಿದೆ. ಬೃಹದಾಕಾರದ ಧ್ವಜಗಳು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳನ್ನೂ ಅಳವಡಿಸಲಾಗಿದೆ. ನಗರದ ಬಿಜೆಪಿ ಶಾಸಕರ ಕಚೇರಿಗಳ ಮುಂದೆ ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ಉಚಿತವಾಗಿ ಧ್ವಜಗಳನ್ನು ವಿತರಿಸಲಾಯಿತು.