‘ಗುರುವಾರ ಮುಕ್ತಾಯವಾದ ಹರಾಜಿನಲ್ಲಿ ಅನುಭವಿ ಮತ್ತು ಯುವ ಆಟಗಾರರನ್ನು ಖರೀದಿಸಿದ್ದೇವೆ. ಈ ಸಲ ಕರ್ನಾಟಕದ ನಾಲ್ಕು ಮಂದಿ ತಂಡದಲ್ಲಿದ್ದಾರೆ. ತರಬೇತಿಯ ವೇಳೆ ಆಟಗಾರರು ತೋರುವ ಸಾಮರ್ಥ್ಯದ ಆಧಾರದಲ್ಲಿ ಆಡುವ ಬಳಗವನ್ನು ಅಂತಿಮಗೊಳಿಸುತ್ತೇವೆ. ರೋಹಿತ್ ಕುಮಾರ್, ಕಾಶಿಲಿಂಗ್ ಅಡಕೆ ಮತ್ತು ಪವನ್ ಕುಮಾರ್ ಅವರಂತಹ ಪ್ರತಿಭಾನ್ವಿತ ರೈಡರ್ಗಳು ತಂಡದಲ್ಲಿದ್ದಾರೆ. ಈ ಬಾರಿ ಪ್ರಶಸ್ತಿ ಗೆಲ್ಲಲು ಶ್ರಮಿಸುತ್ತೇವೆ’ ಎಂದರು.