‘ಪಂಚಾಯ್ತಿಯಿಂದ 15ರಿಂದ 20 ಕೊಳವೆ ಬಾವಿಗಳನ್ನು ಕೊರೆಸಿದರೂ, ನೀರು ಸಿಕ್ಕಿಲ್ಲ. ಗ್ರಾಮದ ಲಕ್ಕನಗೌಡ ಬಣಕಾರ ಎಂಬುವವರು ತಮ್ಮ ಕೊಳವೆ ಬಾವಿಯಿಂದ ಜನತೆಗೆ ಉಚಿತವಾಗಿ ನೀರು ನೀಡುತ್ತಿದ್ದಾರೆ. ಪಂಚಾಯ್ತಿಯಿಂದ ಇದಕ್ಕೆ ಹಣ ನೀಡುವ ಅವಕಾಶವಿದೆ. ಆದರೆ, ಅವರು ಹಣ ಸ್ವೀಕರಿಸದೇ ಉಚಿತವಾಗಿ ನೀರು ಕೊಡುತ್ತಿದ್ದಾರೆ. ಬಸವಂತಪ್ಪ ದೀವಿಗಿಹಳ್ಳಿ ಎಂಬುವವರು ಸರ್ಕಾರಿ ಪ್ರಾಥಮಿಕ ಶಾಲೆಗೆ ಸುಮಾರು 2 ವರ್ಷಗಳಿಂದ ಉಚಿತವಾಗಿ ನೀರು ನೀಡುತ್ತಿದ್ದಾರೆ’ ಎಂದು ಗ್ರಾಮ ಪಂಚಾಯ್ತಿ ಸದಸ್ಯ ರವಿ ಹಾದ್ರಿಹಳ್ಳಿ ತಿಳಿಸಿದರು.