ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಫಲಕ ಕಿತ್ತು ಹಾಕಿರುವ ಕುರಿತು ಚಿಕ್ಕಜಾಲದ ನಿವಾಸಿಯೊಬ್ಬರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲು ₹10 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ರಾಘವೇಂದ್ರ, ₹8 ಲಕ್ಷವನ್ನು ಈ ಹಿಂದೆಯೇ ಪಡೆದಿದ್ದರು. ಶನಿವಾರ ₹2 ಲಕ್ಷ ಸ್ವೀಕರಿಸುವಾಗ ದಾಳಿ ನಡೆಸಲಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.