‘ತಲಘಟ್ಟಪುರದಲ್ಲಿ ವೆಂಕಟರಮಣಪ್ಪ ಅವರ ಪರಿಚಯವಾಗಿತ್ತು. ಮೈಸೂರಿನಲ್ಲಿ ₹ 450 ಕೋಟಿ ಭೂಮಿ ವ್ಯವಹಾರವಿದ್ದು, ಅದರಲ್ಲಿ ನನಗೆ ₹ 250 ಕೋಟಿ ಸಿಗಲಿದೆ. ಸದ್ಯಕ್ಕೆ ಹಣ ಬೇಕಿದೆ ಎಂದು ಕೋರಿಕೆಯಿಟ್ಟಿದ್ದ. ಇದನ್ನು ನಂಬಿದ ವೆಂಕಟರಮಣಪ್ಪ ಅವರು ತಮ್ಮ ಬಳಿಯಿದ್ದ ₹ 49 ಲಕ್ಷವನ್ನು ನೀಡಿದ್ದರು. ಸ್ವಲ್ಪ ದಿನಗಳ ಬಳಿಕ ಆ ಹಣವನ್ನು ವಾಪಸ್ ಮಾಡಿದ್ದ. ಶ್ರೀನಿವಾಸ್ ವ್ಯವಹಾರ ನಂಬಿ, ಜಯನಗರದ ಸುಖಸಾಗರ್ ಹೋಟೆಲ್ ಮಾಲೀಕ ಅಭಿಷೇಕ್ ಪೂಜಾರಿಯಿಂದ₹ 1.20 ಕೋಟಿ ಹಾಗೂ ಇತರೆ ಸ್ನೇಹಿತರಿಂದ ₹ 56 ಲಕ್ಷ ಸಂಗ್ರಹಿಸಿ ಕೊಟ್ಟಿದ್ದರು. ಅದಾದ ಮೇಲೆ ಶ್ರೀನಿವಾಸ್ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದ’ ಎಂದು ದೂರಿನಲ್ಲಿ ತಿಳಿಸಿದ್ದರು.