‘ದೇಹಕ್ಕೆ ಹಸಿವಾದಂತೆ ಮನಸ್ಸಿಗೂ ಆಗುತ್ತದೆ. ಹಾಗಾಗಿ ನಿರಂತರವಾದ ಅಧ್ಯಯನ ಅಗತ್ಯ. ಗ್ರಂಥಗಳಿಗೆಬದುಕನ್ನು ಮಾರ್ಪಡಿಸುವ ಶಕ್ತಿಯಿದೆ. ಸಮಾಜದ ಏಳುಬೀಳುಗಳ ಸಮಗ್ರ ಚಿತ್ರಣವನ್ನು ನಮಗೆ ಪುಸ್ತಕಗಳು ನೀಡಲಿವೆ. ಆದರೆ, ಇಂದಿನ ಯುವಜನತೆ ಮೊಬೈಲ್ನ ಹಿಂದೆ ಬಿದ್ದು, ಅನಗತ್ಯವಿಷಯಗಳಿಗೆ ಹೆಚ್ಚಿನ ಆಸಕ್ತಿ ತೋರುತ್ತಿದೆ. ಇದರಿಂದ ಓದಿನಲ್ಲಿ ಹಿನ್ನಡೆಯಾಗುತ್ತಿದೆ. ಮೊಬೈಲ್, ಟಿ.ವಿ ಮಾಧ್ಯಮಗಳ ಗೀಳಿನಿಂದ ಸಮಯ ಹಾಳು ಮಾಡಿಕೊಳ್ಳುವುದನ್ನು ಬಿಟ್ಟು, ಉತ್ತಮ ಕೃತಿಗಳನ್ನು ಅಧ್ಯಯನ ಮಾಡಿ ವಿದ್ಯಾರ್ಥಿ ಜೀವನವನ್ನು ಹಸನಾಗಿಸಿಕೊಳ್ಳಿ’ ಎಂದರು.