ಬೆಂಗಳೂರು: ಆಗ್ನೇಯ ವಿಭಾಗದ ಡಿಸಿಪಿ ಇಶಾ ಪಂತ್ ಅವರನ್ನು ನಾಲ್ಕು ದಿನಗಳ ಹಿಂದಷ್ಟೇ ಸಿಐಡಿಗೆ ವರ್ಗಾವಣೆ ಮಾಡಿದ್ದ ರಾಜ್ಯ ಸರ್ಕಾರ, ಶನಿವಾರ ಬೆಳಿಗ್ಗೆ ಆದೇಶ ರದ್ದುಗೊಳಿಸಿ ಕೆಲಹೊತ್ತಿನಲ್ಲೇ ಮತ್ತೊಂದು ಆದೇಶದ ಮೂಲಕ ಬೆಂಗಳೂರು ನಗರ ಕಮಾಂಡ್ ಸೆಂಟರ್ ಡಿಸಿಪಿಯಾಗಿ ವರ್ಗಾವಣೆಗೊಳಿಸಿದೆ.
ಫೆ. 26ರಂದು ಇಶಾ ಪಂತ್ ಅವರನ್ನು ಸಿಐಡಿಗೆ, ಜೋಶಿ ಶ್ರೀನಾಥ್ ಮಹದೇವ ಅವರನ್ನು ಆಗ್ನೇಯ ವಿಭಾಗ ಡಿಸಿಪಿ ಆಗಿ ವರ್ಗಾವಣೆ ಮಾಡಲಾಗಿತ್ತು. ಕೇವಲ ನಾಲ್ಕೆ ದಿನಗಳಲ್ಲಿ ಸರ್ಕಾರ ಈ ಆದೇಶವನ್ನು ಮಾರ್ಪಡಿಸಿದೆ.
ಈ ಮಧ್ಯೆ, ಬೆಂಗಳೂರು ನಗರ ಕಮಾಂಡ್ ಸೆಂಟರ್ನ ಡಿಸಿಪಿ ಜಿನೇಂದ್ರ ಖಣಗಾವಿ ಅವರನ್ನು ಆಂತರಿಕ ಭದ್ರತಾ ವಿಭಾಗ (ಐಎಸ್ಡಿ) ಎಸ್ಪಿ ಆಗಿ ವರ್ಗಾವಣೆ ಮಾಡಲಾಗಿದೆ.