ಬೆಂಗಳೂರು: ಭವಿಷ್ಯದ ಬುದ್ಧಿಮತ್ತೆ ಎಂದೇ ಬಿಂಬಿತವಾದ ಮಾನವ ಡಿಜಿಟಲೀಕರಣ, ಉಪಗ್ರಹ ತಂತ್ರಜ್ಞಾನ, ಭವಿಷ್ಯದ ಆಹಾರ ವ್ಯವಸ್ಥೆ, ಕೃಷಿ ಕ್ಷೇತ್ರದ ಆಧುನೀಕರಣ... ಮುಂತಾದ ಮುಂಚೂಣಿ ತಂತ್ರಜ್ಞಾನ ಕ್ಷೇತ್ರಗಳತ್ತ ಕುತೂಹಲದ ದೃಷ್ಟಿ ನೆಟ್ಟ ಯುವವಿಜ್ಞಾನಿಗಳ ಸಮೂಹವೇ ಅಲ್ಲಿ ಸೇರಿತ್ತು. ಈ ಕ್ಷೇತ್ರಗಳ ಹೇರಳ ಅವಕಾಶಗಳ ಕುರಿತು ಒಂದೇ ಸೂರಿನಡಿ ತಿಳಿಯುವ ಅಪೂರ್ವ ಅವಕಾಶ ವಿಜ್ಞಾನದ ವಿದ್ಯಾರ್ಥಿಗಳಿಗೆ ಒದಗಿತ್ತು.